Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕದ್ದಚಿತ್ರ ವಿಜಯರಾಘವೇಂದ್ರ ಪಾತ್ರವೇ ಪ್ರಧಾನ -3/5 ***
Posted date: 08 Fri, Sep 2023 10:34:27 AM
ಚಿತ್ರ: ಕದ್ದಚಿತ್ರ
ನಿರ್ದೇಶನ; ಸುಹಾಸ್ ಕೃಷ್ಣ
ತಾರಾಗಣ, ವಿಜಯ್ ರಾಘವೇಂದ್ರ, ಸಮ್ರತಾ ಸುರೇಂದ್ರನಾಥ್, ರಾಘು ಶಿವಮೊಗ್ಗ ಮತ್ತಿತರರು
ರೇಟಿಂಗ್:  3/5

ಇತ್ತೀಚೆಗೆ ನಟ ವಿಜಯ್ ರಾಘವೇಂದ್ರ ನಾಯಕಿಯ ಜೊತೆ ಮರ ಸುತ್ತುವುದನ್ನು ಬಿಟ್ಟು ವಿಭಿನ್ನ ಪಾತ್ರಗಳ ಕಡೆ ಗಮನ ಹರಿಸಿದ್ದಾರೆ.ಇದೀಗ ಈ ವಾರ ತೆರೆಗೆ ಬಂದಿದರುವ ಕದ್ದಚಿತ್ರವೂ ಒಂದು. ಪ್ರತಿ ಪ್ರೇಮ್‍ನಲ್ಲಿ ವಿಜಯ್ ರಾಘವೇಂದ್ರ ಪಾತ್ರವೇ ಪ್ರಧಾನಾಗಿದೆ.
 
ವಿಜಯ್ ಕ್ಷತ್ರಿಯ(ವಿಜಯ್ ರಾಘವೇಂದ್ರ) ಸಾಮಾನ್ಯ ಬರಹಗಾರ, ಮನೆ ಬಾಡಿಗೆ ಹುಡುಕಿಕೊಂಡು ಅಥಿತಿ-ನಮ್ರತಾ ಸುರೇಂದ್ರನಾಥ್ ಮನೆಯಲ್ಲಿ ಬಾಡಿಗೆ ಪಡೆಯುತ್ತಾನೆ.ಈತನ ನಡವಳಿಕೆ ಮೊದ ಮೊದಲು ಸಹಿಸದ ಅತಿಥಿ ಆತನ ಬರವಣಿಗೆಗೆ ಮಾರು ಹೋಗಿ ಬರವಣಿಗೆಗೆ ಕಡೆಗೆ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಾಳೆ.
 
ವಿಜಯ್ ಕ್ಷತ್ರಿಯ ಬರವಣೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗತ್ತದೆ. ಪ್ರಶಸ್ತಿ ಮೇಲೆ ಪ್ರಶಸ್ತಿ,ಪ್ರಶಂಸೆ ವ್ಯಕ್ತವಾಗುತ್ತದೆ. ಈ ನಡುವೆ ಕಾದಂಬರಿಯನ್ನು ಕದ್ದ ಆರೋಪ ವಿಜಯ್ ಮೇಲೆ ಬರುತ್ತದೆ. ಯಶಸ್ಸು ಆಕಾಶದತ್ತರ ಏರಿದಂತೆ ಪಾತಾಳಕ್ಕೆ ಕುಸಿಯುತ್ತದೆ.
 
ಪ್ರಕಾಶಕರಿಂದಲೂ ಅವಮಾನಕ್ಕೆ ಒಳಗಾಗಿ ಹತಾಶನಾಗುತ್ತಾನೆ ಇಂತಹ ವಿಜಯ್ ಮುಂದೇನು ಮಾಡ್ತಾನೆ ಎನ್ನುವುದು ಚಿತ್ರದ ತಿರುಳು ಚಿತ್ರದಲ್ಲಿ ಸಿಗರೇಟು, ಮದ್ಯ, ನಟ ವಿಜಯ್ ಪಾತ್ರದಷ್ಟೇ ಪಾತ್ರಮುಖ್ಯತೆ ನೀಡಿದ್ದಾರೆ ನಿರ್ದೇಶಕ ಸುಹಾಸ್ ಕೃಷ್ಣ, ವಿಜಯ್ ರಾಘವೇಂದ್ರ ಪಾತ್ರಗಳಲ್ಲದೆ ಹಲವು ಪಾತ್ರಗಳು ಸಿಗರೇಟು, ಮಧ್ಯದಲ್ಲಿ ತೇಲಾಡಿವೆ.

ನಿರ್ದೇಶಕರು ತನ್ನ ಪ್ರಥಮ ಪ್ರಯತ್ನದಲ್ಲೇ  ಅವರ ಅತ್ಯುತ್ತಮ ಕೆಲಸದಲ್ಲಿ ಗಮನ ಸೆಳೆದಿದರೆ  ಹೊಸಬರಂತೆ ಕಾಣುತಿಲ  ಕ್ಲೈಮಾಕ್ಸ್  ಅದ್ಭುತವಾಗಿದೆ .
 
 
ಈ ನಡುವೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ವಿಜಯ ಕ್ಷತ್ರಿಯ ಹೇಗೆ ಹಿಡಿಯುತ್ತಾನೆ. ಈ ನಡುವೆ ಯಾವ ಸಮಸ್ಯೆ ಎದುರಿಸುತ್ತಾನೆ ಅದರಿಂದ ಹೊರಬರ್ತಾನಾ ಎನ್ನುವುದು ಕುತೂಹಲದ ಸಂಗತಿ. ಕೆಲವು ಸನ್ನಿವೇಶ ಮುಜುಗರ ಅನ್ನಿಸಲಿದೆ.
 
ನಮತ್ರಾ ಸುರೇಂದ್ರ ನಾಥ್, ರಾಘು ಶಿವಮೊಗ್ಗ ಸೇರಿದಂತೆ ತಮಗೆ ಸಿಕ್ಕ ಪಾತ್ರಕ್ಕೆ ಕೆಲಸ ಮಾಡಿದ್ದಾರೆ  ಉಳಿದಂತೆ ಬರುವ ಎಲ್ಲಾ ಪಾತ್ರದಾರಿಗಳು ಕೂಡ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ.
 
 
.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕದ್ದಚಿತ್ರ ವಿಜಯರಾಘವೇಂದ್ರ ಪಾತ್ರವೇ ಪ್ರಧಾನ -3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.